ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ"

ಇಮೇಜ್
"ನದಿಗಳನ್ನು ರಕ್ಷಿಸಿ ಎಂಬ ಬೃಹತ್ ಅಭಿಯಾನದ ಮಹತ್ವ"  'ಗಂಗೇಚ ಯಮುನೇಚ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರುಮ್ ' ಎಂಬ ಶ್ಲೋಕದಲ್ಲಿ ಪ್ರಸ್ತಾಪವಾಗಿರುವಂತೆ ಪವಿತ್ರವಾದ ನದಿಗಳು ನಮ್ಮ ಜೀವನಾಡಿಗಳೇ ಆಗಿವೆ, ನದಿಗಳನ್ನು ದೇವರಂತೆ ಪೂಜಿಸುತ್ತಾ ಬಂದಿರುವ ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ತನ್ನದೇ ಆದ ಶ್ರೇಷ್ಠ ಸ್ಥಾನಮಾನವಿದೆ, ಶತಮಾನಗಳಿಂದ ನಮ್ಮ ಪೂರ್ವಜರು ನದಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ, ಕಳೆದ ೫೦ ವರ್ಷಗಳಿಂದ ನದಿಗಳ ಸ್ಥಿತಿ ಚಿಂತಾಜನಕವಾಗಿದೆ, ಜೀವಜಲವಾದ ನೀರಿನ ಮೂಲಗಳಾಗಿದ್ದ ಕಾವೇರಿ, ಕೃಷ್ಣ, ಗೋದಾವರಿ ನದಿಗಳು ೨೦ ಪ್ರತಿಶತಕ್ಕೂ ಹೆಚ್ಚು ಬತ್ತಿ ಹೋಗಿವೆ, ಕಾವೇರಿ ಬತ್ತು ಹೋದ ಪರಿಣಾಮ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ರೈತಾಪಿ ವರ್ಗ ಹಾಗೂ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿರುವುದು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ, ಕರ್ನಾಟಕ & ತಮಿಳುನಾಡು ಅಷ್ಟೇ ಅಲ್ಲದೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದಷ್ಟು ಕೆಟ್ಟದಾಗಿದೆ,ನೂರಾರು ವರ್ಷಗಳಿಂದ ಕೃಷಿಯನ್ನು ಮೂಲಕಸುಬನ್ನಾಗಿಸಿಕೊಂಡಿರುವ ಕೃಷಿಕರು ೫೦ ವರ್ಷಗಳ ಹಿಂದೆ ಎಷ್ಟು ನೀರನ್ನು ಬಳಸುತ್ತಿದ್ದರೋ ಅದೇ ಪ್ರಮಾಣದ ನೀರನ್ನು ಇಂದಿಗೂ ಸಹ ಬಳಸುತ್ತಿದ್ದಾರೆ, ಆ ಒಟ್ಟು ಪ್ರಮಾಣದ ಶೇಖಡಾ ೩೦ ರಷ್ಟು ನೀರನ್ನು ಬಳಸಿ ಉತ್ತಮವಾಗಿ  ಕೃಷಿ ಮಾಡಬ...

"ಟಾಯ್ಲೆಟ್ ಏಕ್ ಪ್ರೇಮ ಕಥಾ" ತರಹದ ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರಗಳು ತೆರೆಯ ಮೇಲೆ ಹೆಚ್ಚೆಚ್ಚು ಬರುವಂತಾಗಲಿ:

ಇಮೇಜ್
"ಟಾಯ್ಲೆಟ್ ಏಕ್ ಪ್ರೇಮ ಕಥಾ" ತರಹದ ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರಗಳು ತೆರೆಯ ಮೇಲೆ ಹೆಚ್ಚೆಚ್ಚು ಬರುವಂತಾಗಲಿ: ಆಗಸ್ಟ್ ೧೧ ರಂದು ವಿಶ್ವದಾದ್ಯಂತ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಎಂಬ ಚಲನಚಿತ್ರ ಸಹಸ್ರಾರು  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು,ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿರುವ ಈ ಚಿತ್ರ 'ಬಯಲು ಶೌಚ ಮುಕ್ತ' ಕಥಾಹಂದರವನ್ನು ಒಳಗೊಂಡಿದೆ, ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೦ ವರ್ಷಗಳಾದರೂ ಬಹಳಷ್ಟು ಹಳ್ಳಿಗಳಲ್ಲಿ ಶೌಚಾಲಯಗಳೇ ಇಲ್ಲ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದವರಂತೆ ಬಹಳಷ್ಟು ಮಂದಿ ಶೌಚಾಲಯಗಳನ್ನು ಬಳಸದೆ ಬಯಲಿಗೆ ಶೌಚಕ್ಕೆ ತೆರಳುತ್ತಾರೆ, ಇದರ ಕುರಿತಾಗಿ ಅರಿವು ಮೂಡಿಸಲು ಎಷ್ಟೋ ಮಂದಿ ಪ್ರಯತ್ನ ಪಟ್ಟಿದ್ದಾರೆ ಹಾಗೂ ಪ್ರಯತ್ನ ಪಡುತ್ತಲ್ಲೂ ಸಹ ಇದ್ದಾರೆ, ೫ ವರ್ಷಗಳ ಹಿಂದೆ ಭಾರತ-ನೇಪಾಳ ಗಡಿ ಭಾಗದ ಸಮೀಪವಿರುವ ಪುಟ್ಟ ಹಳ್ಳಿಯೊಂದರಲ್ಲಿ ಪ್ರಿಯ ಭಾರತಿ ಎಂಬ ದಿಟ್ಟ ಮಹಿಳೆ ಬಯಲು ಶೌಚ ವ್ಯವಸ್ಥೆಯ ವಿರುದ್ಧ ಟೊಂಕ ಕಟ್ಟಿ ನಿಂತು ಅತ್ತೆಯ ಮನೆಯ ಕಡೆ ಅವರಿಗೆ ಸೆಡ್ಡು ಹೊಡೆದಳು,ಮದುವೆಯ ನಂತರ ಮನೆಯಲ್ಲಿ ಶೌಚಾಲಯ ಇಲ್ಲದ ಕುರಿತು ಪ್ರಿಯ ಮರುಗುತ್ತಾಳೆ ,ಇದನ್ನು ಪ್ರಶ್ನಿಸಿದಾಗ,ಪ್ರಿಯಾಳ ಅತ್ತೆ ಆಕೆಯ ಕುರಿತು "ನಮ್ಮ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ, ನಾವೆಲ್ಲರೂ ಬಹಿರ್ದೆಸೆಗಾಗಿ ಬಯಲಿಗೆ ತೆರಳುತ್ತೇವೆ" ಎಂದರು,...