ಪೋಸ್ಟ್‌ಗಳು

ಅಕ್ಟೋಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???

ಇಮೇಜ್
ಕಳೆದ ಕೆಲ ತಿಂಗಳಿಂದ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಚಲನಚಿತ್ರ ಶುರುವಾಗುವ ಮುನ್ನ ಪ್ರಸಾರ ಮಾಡಲಾಗುತ್ತಿದೆ, ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆ ಎಂಬ ಚರ್ಚೆ ಕೂಡ ಬಹಳಷ್ಟು ಸಮಯದಿಂದ ನಡೆಯುತ್ತಿದೆ, ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಈ ಕುರಿತಾಗಿ ಮಹತ್ವವಾದ ತೀರ್ಪೊಂದನ್ನು ನೀಡಿತು, ಆ ತೀರ್ಪು ಏನೆಂದರೆ ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆಂಬೆದು ಕಡ್ಡಾಯವೇನಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದು !!  ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ವ್ಯಕ್ತಿ ಕುಳಿತ್ತಿದ್ದರೆ ಆ ವ್ಯಕ್ತಿಗೆ ರಾಷ್ಟಪ್ರೇಮವಿಲ್ಲ ಎಂಬ ಗ್ರಹಿಕೆ ತಪ್ಪು ಎನ್ನುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಂಬೋಣ, ಈ ತೀರ್ಪು ಹೊರಬಂದ ಕೂಡಲೇ ಪರ ಹಾಗೂ ವಿರೋಧಗಳು ವ್ಯಕ್ತವಾದವು,ದೇಶಪ್ರೇಮದ ಕಥಾ ಹಂದರವುಳ್ಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಕಮಲ್ ಹಾಸನ್ ಈ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸುತ್ತಾ " ಸುಪ್ರೀಂ ಕೋರ್ಟ್ ನ ತೀರ್ಮಾನವನ್ನು ಸ್ವಾಗತಿಸುತ್ತೇನೆ, ಸಿಂಗಾಪುರ್ ಅಲ್ಲಿ ರಾತ್ರಿಯ ವೇಳೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತದೆ, ನಮ್ಮ ರಾಷ್ಟ್ರ ಗೀತೆಯನ್ನು ಸಹ ದೂರದರ್ಶನದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಪ್ರಸಾರ ಮಾಡಲಿ, ನನ್ನ ದೇಶಭಕ್ತಿಯನ್ನು ವಿವಿಧ ಸ್ಥಳಗಳಲ್ಲಿ ಹಾಗೂ ವಿವಿಧ ವೇಳೆಗಳಲ್ಲಿ ಪರೀಕ್ಷಿಸಬೇಡಿ " ಎಂದರು,  ರಾಷ್ಟ್ರಗೀತೆ  ಪ್ರಸಾರವಾಗುವ  ವೇಳೆ ಎದ್ದು...

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ಇಮೇಜ್
ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವಾದ ದೀಪಾವಳಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ, ಹಬ್ಬದ ಸಿದ್ಧತೆ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ, ಹಬ್ಬ ಆಚರಿಸಲು ಸಿದ್ಧರಿದ್ದ ದೆಹಲಿಯ ಜನರಿಗೆ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ನೀಡಿದೆ, ಪಟಾಕಿಗಳನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ ನ ನಿಯಮ ಈಗಾಗಲೇ ಬಹಳಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದೆ, ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ, ದೀಪಾವಳಿ ಅಂದರೆ ನಮಗೆ ನೆನಪಾಗುವುದು ಆನೆ ಪಟಾಕಿ, ಲಕ್ಷ್ಮಿ ಪಟಾಕಿ, ಬಾಂಬ್, ೧೦೦ ವಾಲಾ, ೧೦೦೦ ವಾಲಾ,ಸುರು ಸುರು ಬತ್ತಿ, ಮತಾಪು, ಸೆವೆನ್ ಶಾಟ್ಸ ಹಾಗೂ ಇತರ ಪಟಾಕಿ ಗಳು, ದೀಪಾವಳಿ ಹಾಗೂ ಬಾಲ್ಯದ ನಡುವಿನ ಸಂಬಂಧ ಅದ್ಭುತವಾದದ್ದು, ಅಪ್ಪನ ನೆರವಿನಿಂದಲೋ, ಮಾವನ ನೆರವಿನಿಂದಲೋ, ಸ್ನೇಹಿತನ ನೆರವಿನಿಂದಲೋ ಪಟಾಕಿ ಹೊಡೆದಿದ್ದ ದಿನಗಳನ್ನು ಹೇಗೆ ತಾನೆ ಮರೆಯಲು ಸಾಧ್ಯ, ಪಟಾಕಿ ಪೆಟ್ಟಿಗೆಗಾಗಿ ಅಪ್ಪನೊಂದಿಗೆ ಹಾಗೂ ತಾತನೊಂದಿಗೆ ಕಚ್ಚಾಡಿದ ಕ್ಷಣಗಳು ನೆನಪಿನ ಪುಟದಿಂದ ದೂರ ಸರಿಯಲಾರದಂತದ್ದು, ಪಕ್ಕದ ಮನೆಯ ಸ್ನೇಹಿತ ಹೆಚ್ಚು ಪಟಾಕಿ ಹೊಡೆಯುತಿರುವುದನ್ನು ಕಂಡು ಹೊಟ್ಟೆ ಉರಿದುಕೊಂಡವರ ಪಟ್ಟಿ ಏನು ಕಡಿಮೆಯೇ ?? ದೀಪಾವಳಿ ಹಬ್ಬ ಬಂತೆಂದರೆ ಮನೆ ಮಂದಿಗಳೆಲ್ಲ ಒಟ್ಟಾಗಿ ಸೇರುತ್ತಿದ್ದರು, ಅಭ್ಯಂಜನ ಸ್ನಾನ ( ಎಣ್ಣೆ ಸ್ನಾನ ) ದೊಂದಿಗೆ ಹಬ್ಬ ಆರಂಭವಾಗುತ್ತಿತ್ತು ,ದೀಪಾವಳಿಗೆಂದೇ ತಯಾರಿಸಿದ್...