ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಕ್ರಾಂತಿಯ ಹರಿಕಾರ ಭಗತ್ ಸಿಂಗ್"

ಇಮೇಜ್
"ಕ್ರಾಂತಿಯ ಹರಿಕಾರ ಭಗತ್ ಸಿಂಗ್"  ದೇಶಭಕ್ತರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲ ಅಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ರ ಜನನವಾಗಿದ್ದು ೧೯೦೭ ರ ಸೆಪ್ಟೆಂಬರ್ ೨೮ ರಂದು, ತಂದೆ ಕಿಶನ್ ಸಿಂಗ್ ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದವರು,ಭಗತ್ ನ ಚಿಕ್ಕಪ್ಪ ಅಜಿತ್ ಸಿಂಗ್ ಆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ದೇಶಪ್ರೇಮಿಗಳನ್ನು ಹುರಿದುಂಬಿಸಿದ್ದರು,ಇಂತಹ ದೇಶಭಕ್ತರ ವಂಶದಲ್ಲಿ ಜನಿಸಿದ ಭಗತನಿಗೆ ರಕ್ತದಲ್ಲೇ ದೇಶಭಕ್ತಿ ಹರಿಯುತ್ತಿತ್ತು, ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಘೋರ ಕೃತ್ಯದಿಂದ ಅಪಾರವಾಗಿ ನೊಂದಿದ್ದ ಲಕ್ಷಾಂತರ ಭಾರತೀಯರಲ್ಲಿ ಭಗತ್ ಕೂಡ ಒಬ್ಬ, ಜಲಿಯನ್ ವಾಲಾಬಾಗ್ ನಲ್ಲಿ ನೆಡೆದ ಅಮಾನವೀಯ ದುಷ್ಕೃತ್ಯದಲ್ಲಿ ಡಯರ್ ಎಂಬ ರಾಕ್ಷಸಿಯ ಪ್ರವೃತ್ತಿಯುಳ್ಳ ನೀಚ ಬ್ರಿಟಿಷ್ ಅಧಿಕಾರಿ ಸಾವಿರಾರು ಅಮಾಯಕ ಭಾರತೀಯರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದ,ಇದರಿಂದ ಪೆಟ್ಟು ತಿಂದ ಭಾರತೀಯರು ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಡಲು ಸನ್ನದ್ಧರಾದರು.ಚಿಕ್ಕಂದಿನಿಂದ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದ ಭಗತ್ ಸಿಂಗ್ ತಾರುಣ್ಯದಲ್ಲಿ ಕ್ರಾಂತಿಕಾರಿ ವಿಚಾರಧಾರೆಯೆಡೆಗೆ ಸೆಳೆಯಲ್ಪಟ್ಟಿದ್ದ, ಸುಖ್ ದೇವ್ ಹಾಗೂ ಗೆಳೆಯರ ಜೊತೆಗೂಡಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಲು ಸಮಾನಮನಸ್ಕರ ಗುಂಪನ್ನು ಹುಟ್ಟು ಹಾಕಿದ್ದ, ಕ್ರಾಂತಿಕಾರಿ ರಾಮ ಪ್ರಸಾದ್ ಬಿಸ್ಮಿಲ್ಲರ ಜೊತೆಗೂಡಿ ಕ...

ಭಾರತ ಕಂಡ ಅಪರೂಪದ ರತ್ನ " ಸರ್ ಎಂ ವಿಶ್ವೇಶ್ವರಯ್ಯ"

ಇಮೇಜ್
ಇಂದು ಭಾರತ ದೇಶದಾದ್ಯಂತ ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳಿವೆ, ಪ್ರತಿ ವರ್ಷವೂ ಸಹ ಲಕ್ಷಾಂತರ ಇಂಜಿನಿಯರ್ ಗಳು ಸೃಷ್ಟಿಗೊಳ್ಳುತ್ತಿದ್ದಾರೆ ಆದರೆ ಇಂಜಿನಿಯರ್ ಎಂದಾಕ್ಷಣ ನಮಗೆ ನೆನಪಾಗುವ ಹೆಸರೊಂದಿ ದ್ದರೆ ಅದುವೇ ಸರ್ ಎಂ ವಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಿದ್ದ ಮಹಾನ್ ಕರ್ಮಯೋಗಿ ಹಾಗೂ ವಿಶ್ವ ವಿಖ್ಯಾತ ಇಂಜಿನಿಯರ್ ವಿಶ್ವೇಶ್ವರಯ್ಯನವರಿಗೆ  ಗೌರವ ಸೂಚಿಸುವ ಸಲುವಾಗಿ ಇಂಜಿನಿಯರ್ ದಿನವನ್ನು ಅವರ ಜನ್ಮದಿನವಾದ ಸೆಪ್ಟೆಂಬರ್ ೧೫ ರಂದು  ಪ್ರೀತಿಪೂರ್ವಕವಾಗಿ ಆಚರಿಸಲಾಗುತ್ತದೆ, ೧೫೦ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನನವಾಗುತ್ತದೆ, ಆರ್ಥಿಕವಾಗಿ ಅಷ್ಟೇನೂ ಸಧೃಢವಲ್ಲದ ಕುಟುಂಬದಲ್ಲಿ ಜನಿಸಿದ ಅಯ್ಯನವರು ನಾನಾ ಕಷ್ಟಗಳ ನಡುವೆಯೂ ವ್ಯಾಸಂಗದಲ್ಲಿ ಎಲ್ಲರಿಗಿಂತ ಮುಂದಿದ್ದರು, ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಅಯ್ಯನವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊರ ರಾಜ್ಯಕ್ಕೆತೆರಳುತ್ತಾರೆ, ಓದಿನಲ್ಲಿ ಸದಾ ಮುಂದಿದ್ದ ಅಯ್ಯನವರು ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ, ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಹೊಂದಿದ್ದ ಅಯ್ಯನವರಿಗೆ ಸರ್ಕಾರೀ ನೌಕರಿ ಸುಲಭವಾಗಿ ಒಲಿಯುತ್ತದೆ, ಕರ್ನಾಟಕದ ಹೊರಗೆ ತಮ್ಮ ವೃತ್ತಿಯನ್ನು ಆರಂಭಿಸು...

ಆಧಾರಗಳಿಲ್ಲದೆ ಮೋದಿ ಹಾಗೂ ಸಂಘ ಪರಿವಾರವನ್ನು ದೂಷಿಸುವುದು ತರವೇ???

ಇಮೇಜ್
ಆಧಾರಗಳಿಲ್ಲದೆ ಮೋದಿ ಹಾಗೂ ಸಂಘ ಪರಿವಾರವನ್ನು ದೂಷಿಸುವುದು ತರವೇ??? ಪತ್ರಕರ್ತೆ ಗೌರಿ ಲಂಕೇಶ್ ಸೆಪ್ಟೆಂಬರ್ ೫ ರ ರಾತ್ರಿಯಂದು ಅಪರಿಚಿತರ ಗುಂಡಿನ ದಾಳಿಯಿಂದ ಕೊಲೆಗೀಡಾಗುತ್ತಾರೆ,ಕೊಲೆ ಆದ ಕೆಲವೇ ತಾಸಿನಲ್ಲಿ ಹಲವೆಡೆ ಪ್ರತಿಭಟನೆಗಳಾಗುತ್ತದೆ, ಕೊಲೆಯನ್ನು ಖಂಡಿಸಿ ಪ್ರತಿಭಟಿಸುವದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಆದರೆ ಘಟನೆಯ ಬಗ್ಗೆ ವರದಿ ಬರುವ ಮುನ್ನವೇ ನಿರ್ದಿಷ್ಟ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ದೂಷಿಸುವುದು ಎಷ್ಟು ಸರಿ?? ಗೌರಿ ಲಂಕೇಶ್ ಅವರ ವಿಚಾರಧಾರೆಗಳು ಹಾಗೂ ಇತರರ ವಿಚಾರಧಾರೆಗಳು ಒಂದೇ ಆಗಿರಬೇಕೆಂಬ ಬಗ್ಗೆ ಯಾವುದೇ ಕಾನೂನುಗಳಾಗಲಿ ನಮ್ಮ ಸಂವಿಧಾನದಲ್ಲಿಲ್ಲ, ಗೌರಿ ಲಂಕೇಶ್ ಅವರ ಸಿದ್ದಾಂತಗಳನ್ನು ಒಪ್ಪದವರು ಅದರ ವಿರುದ್ಧ ದನಿ ಎತ್ತಿದ್ದಾರೆ ಅದೇ ರೀತಿ ಗೌರಿ ಲಂಕೇಶ್ ಸಹ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಇತರರ ವಿರುದ್ಧ ದನಿ ಎತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪುಟಗಟ್ಟಲೆ ಮಾತನಾಡುವವರಿಗೆ ಇದರ ಬಗ್ಗೆ ಅರಿವಿಲ್ಲದಿರುತ್ತದೆಯೇ? ಗೌರಿ ಲಂಕೇಶ್ ಕೊಲೆಯಾದ ಮಾರನೆಯ ದಿವಸ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಮಾತನಾಡುತ್ತಾ " ದೇಶದಲ್ಲಿ ಆರ್ ಎಸ್ ಎಸ್ ಹಾಗೂ ಭಾ ಜ ಪ ವಿರುದ್ಧ ಮಾತನಾಡುವದೇ ತಪ್ಪಾಗಿದೆ" ಎನ್ನುತ್ತಾರೆ, ಕೊಲೆಯ ಬಗ್ಗೆ ತನಿಖೆ ಈಗಷ್ಟೇ ಶುರುವಾಗಿದ್ದು ಪೊಲೀಸರ ಬಳಿ ಅಥವಾ ಸರ್ಕಾರದ ಬಳಿ ಯಾವ...