ಪೋಸ್ಟ್‌ಗಳು

ಮೇ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು?

ಇಮೇಜ್
ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ಶಿಕ್ಷಿಸಿದರೆ ತಪ್ಪೇನು? ಒಂದು ತಿಂಗಳ ಹಿಂದೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಚುನಾವಣೆ ನಡೆಯುತಿತ್ತು, ಚುನಾವಣೆ ವೇಳೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸಿ ಆರ್ ಪಿ ಎಫ್ ಯೋಧರ ಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು, ಕಾಶ್ಮೀರದಲ್ಲಿ ಬಹುತೇಕ ಸಮಯ ಶಾಂತಿಯನ್ನು ಕದಡುವ ರಾಷ್ಟ್ರ ದ್ರೋಹಿಗಳ ಗುಂಪು ಸದಾ ಎಚ್ಚರವಾಗಿಯೇ ಇರುತ್ತದೆ, ಪ್ರತ್ಯೇಕವಾದಿಗಳಿಂದ ನೆರವು ಪಡೆಯುವ ಪುಂಡರು ಕಾಶ್ಮೀರದಲ್ಲಿ ಪುಂಡಾಟ ನಡೆಸುತ್ತಾರೆ, ಕಾಶ್ಮೀರಿ ಜನಗಳ ಸೇವೆಗೆಂದೇ ನಿಯೋಜಿತರಾಗಿರುವ ಸೈನಿಕರ ವಿರುದ್ಧ ತಿರುಗಿ ಬೀಳುವ ಈ ಗುಂಪು ಸೈನಿಕರರಿಗೆ ನಾನಾ ವಿಧದ ಕಾಟ ಕೊಡುತ್ತಾ ಬಂದಿದೆ,ಸೈನ್ಯದ ವಿರುದ್ಧ ಕಲ್ಲು ತೂರುವ ದೃಶ್ಯಗಳು ಸುದ್ಧಿ ವಾಹಿನಿಗಳಲ್ಲಿ ಬಿತ್ತರವಾಗಿದ್ದನ್ನು ಕಂಡು ಮರುಗದವರಿಲ್ಲ,ಇದೇ ರೀತಿಯ ಕಲ್ಲು ತೂರುವ ಹೇಡಿ ಕೃತ್ಯ ಕೆಲ ದಿನಗಳ ಹಿಂದೆ ಕಾಶ್ಮೀರದಲ್ಲಿ ಜರುಗಿತ್ತು, ಕಲ್ಲು ತೂರಾಟ ತಡೆಯಲು "ಮೇಜರ್ ಗೊಗೋಯ್" ಅವರು ಒಂದು ಉಪಾಯ ಮಾಡುತ್ತಾರೆ, ಆ ಉಪಾಯವೇನೆಂದರೆ ಕಲ್ಲು ತೂರಾಟ ಮಾಡುತ್ತಿರುವ ಗುಂಪಿನಿಂದ ಒಬ್ಬನನ್ನು ಗುರುತಿಸುವುದು ಹಾಗೂ ಅವನನ್ನು ಸೇನಾ ವಾಹನವಾದ ಜೀಪಿನ ಮುಂಬದಿಯಲ್ಲಿ ಕಟ್ಟುವುದು, ಕಶ್ಮೀರ ಮತ್ತಷ್ಟು ಉದ್ವಿಗ್ನವಾಗದಿರಲೆಂದು ಈ ಉಪಾಯ ಮಾಡಿದ ಮೇಜರ್ ಗೊಗೋಯ್ ಅವರ ದಿಟ್ಟ ನಡೆಯನ್ನು ನಾವೆಲ್ಲಾ ಮೆಚ್ಚಲೇಬೇಕು, ಅವರ ಧೈರ್ಯಕ್ಕೆ ನಮ್ಮದೊಂ...

"ದಿನೇದಿನೇ ನಮ್ಮನ್ನು ಆವರಿಸುತ್ತಿರುವ ಚೂಟಿಯುಲಿಗಳು(ಸ್ಮಾರ್ಟ್ ಫೋನ್ ಗಳು )"

ಇಮೇಜ್
ದಿನೇದಿನೇ ನಮ್ಮನ್ನು ಆವರಿಸುತ್ತಿರುವ ಚೂಟಿಯುಲಿಗಳು(ಸ್ಮಾರ್ಟ್ ಫೋನ್ ಗಳು ) ಹತ್ತು ವರ್ಷಗಳ ಹಿಂದೆ ಬಹುತೇಕರ ಬಳಿ ಮೊಬೈಲ್ ಫೋನ್ ಗಳೇ ಇರಲಿಲ್ಲ, ಆಗಷ್ಟೇ ಕಾಲೇಜಿನ ಮೆಟ್ಟಿಲು ಏರಿದ್ದ ಸ್ವಲ್ಪ ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಗಳು ರಾರಾಜಿಸುತ್ತಿದ್ದವು, ನೋಕಿಯಾ ಕಂಪನಿಯ ೧೧೦೦,೧೬೦೦ ಹಾಗು ೬೬೦೦ ಸರಣಿಯ ಮೊಬೈಲುಗಳು ಹೆಚ್ಚಾಗಿ ಕಂಡುಬರುತ್ತಿತ್ತು ಇದಲ್ಲದೆ ಸೋನಿ ಏರಿಕ್ಸೆನ್ ಕಂಪನಿಯ ವಾಕ್ಮನ್ ಹಾಗೂ ಸೈಬರ್ ಶಾಟ್ ಸರಣಿಯ ಮೊಬೈಲುಗಳು ಕೆಲವರ ಬಳಿ ಇತ್ತು, ಈಗಿನ ದಿನಗಳಲ್ಲಿ ಉಚಿತ ಸಿಮ್ ಗಳು ಲಭ್ಯವಿರುವಂತೆ ಆಗಿನ ದಿನಗಳಲ್ಲಿ ಉಚಿತ ಸಿಮ್ ಗಳು ದೊರಕುತ್ತಿರಲಿಲ್ಲ, ಒಂದು ಸಿಮ್ ಖರೀದಿಸಲು ಬಹಳಷ್ಟು ಹಣ ಖರ್ಚಾಗುತ್ತಿತ್ತು, ಹೆಚ್ಚು ಹಣ  ಕೊಟ್ಟು ಸಿಮ್ ಕೊಂಡುಕೊಂಡ ನೆನಪು ಕೆಲವರಿಗಿದೆ,ವಿದ್ಯಾರ್ಥಿಗಳಿಗೆ ಹಾಗೂ ಸೀಮಿತ ಗ್ರಾಹಕರಿಗೆ ಮಾತ್ರ ಉಚಿತ ಸಂದೇಶ ರವಾನಿಸುವ ಕೊಡುಗೆಗಳಿತ್ತು, ಆಗ  ಟೆಕ್ಸ್ಟ್ ಮೆಸೇಜ್ ಗಳ ರವಾನೆ ಹೆಚ್ಚಾಗಿ ಆಗುತಿತ್ತು, ಆಗಾಗ ದೃಶ್ಯ ಸಂದೇಶಗಳನ್ನು(ಪಿಕ್ಚರ್ ಮೆಸೇಜ್ ) ಗಳನ್ನು ಪ್ರೀತಿಪಾತ್ರರಿಗೆ ಕಳುಹಿಸುವುದೇ ದೊಡ್ಡ ಸಂಗತಿಯಾಗಿತ್ತು,ಬೆರಳೆಣಿಕೆ ಅಷ್ಟು ಜನರ ಬಳಿ ತರ ತರದ ರಿಂಗಟೋನ್ ಗಳು ಇರುತ್ತಿದ್ದವು, ಈಗಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಹಾಡುಗಳನ್ನು ಕೇಳುವಂತೆ ಆಗಿನ ದಿನಗಳಲ್ಲಿ ರಿಂಗ್ ಟೋನ್ ಗಳನ್ನೂ ಕೇಳಲಾಗುತ್ತಿತ್ತು !! ಉಚಿತ ಕರೆಗಳು ನಿರ್ದಿಷ್...

"ನೂತನ ಅಧ್ಯಕ್ಷರ ಆಯ್ಕೆ ಹಾಗೂ ಅದರ ಪ್ರಭಾವಗಳು"

ಇಮೇಜ್
"ನೂತನ ಅಧ್ಯಕ್ಷರ ಆಯ್ಕೆ ಹಾಗೂ ಅದರ ಪ್ರಭಾವಗಳು" ಸತತ ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ಭಾರತೀಯ ಸತ್ಪ್ರಜೆಗಳು ೨೦೧೪ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 'ಭಾರತೀಯ ಜನತಾ ಪಕ್ಷಕ್ಕೆ' ಬಹುಮತ ನೀಡಿದರು, ಬಹುತೇಕ ವರ್ಷಗಳ ನಂತರ ಭಾ ಜ ಪ ಸ್ವತಂತ್ರವಾಗಿ ಸರ್ಕಾರ ರಚಿಸುವ ಮಟ್ಟಿಗೆ ಶಕ್ತಿಶಾಲಿ ಪಕ್ಷವಾಗಿ ಹೊರಹೊಮ್ಮಿತ್ತು,ಮೇ ೨೬ ರಂದು 'ನರೇಂದ್ರ ದಾಮೋದರ್ ದಾಸ್ ಮೋದಿ' ಅವರು ಭಾರತದ ಪ್ರಧಾನಿಯಾಗಿ ಆಯ್ಕೆ ಆದರು, ಹತ್ತು ವರ್ಷಗಳ ಕಾಲ ನಡೆದ ದುರಾಡಳಿತ, ಅಸಮರ್ಥ ನಾಯಕತ್ವ, ಇತರರ ಕೈಗೊಂಬೆ ಆಗಿದ್ದ ಆಡಳಿತ ಯಂತ್ರ, ಹೀಗೆ ಹತ್ತು ಹಲವು ವಿಷಯಗಳಿಂದ ಜನಸಮಾನ್ಯರು ಆಗಿನ ಆಡಳಿತ ಪಕ್ಷದ ವಿರುದ್ಧ ರೋಸಿ ಹೋಗಿದ್ದರು, ಆಗ ಜನರ ಪಾಲಿಗೆ ಆಶಾಕಿರಣವಾಗಿ ಕಂಡಿದ್ದು ಗುಜರಾತಿನ ಯಶಸ್ವಿ ಮುಖ್ಯಮಂತ್ರಿ ಆಗಿದ್ದ ಮೋದಿ, ದಶಕಗಳ ಕಾಲ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ ಅವರು ಗುಜರಾತ್ ರಾಜ್ಯವನ್ನು ಮಾದರಿ  ರಾಜ್ಯವನ್ನಾಗಿ ಮಾಡಿದ್ದರು, ನೀರಿನ ಸಮಸ್ಯೆ ಇದ್ದ ಗುಜರಾತಿನ ಹಲವೆಡೆಗಳಲ್ಲಿ ನೂತನ ತಂತ್ರಜ್ಞಾನದ ಮೂಲಕ ಆ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿ ಆಗಿದ್ದರು, ಕೃಷಿಕರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿ ರೈತರ ಪಾಲಿನ ಆಶಾಕಿರಣವಾದರು, ಗುಜರಾತ್ ಪ್ರವಾಸೋದ್ಯಮವನ್ನು ಅಭಿವೃದ್ದಿಸಿ ಜನ ಸಮೂಹವನ್ನು ಗುಜರಾತಿನೆಡೆಗೆ ಸೆಳೆದರು, ಉತ್ತಮ ರಸ್ತೆಗಳನ್ನು ಕಲ್ಪಿಸಿಕೊಡುವ ಮೂಲಕ ಜನರಿಗೆ ಹತ್ತಿರವಾದರು, ಮೂ...

"ಗೋವಿನ ನೋವಿಗೆ ಸ್ಪಂದಿಸುತ್ತಿರುವ ಸಹೃದಯಿಗಳು"

"ಗೋವಿನ ನೋವಿಗೆ ಸ್ಪಂದಿಸುತ್ತಿರುವ ಸಹೃದಯಿಗಳು"  ಅನಾದಿ ಕಾಲದಿಂದ ಇಲ್ಲಿಯವರೆಗೂ ಗೋ ಮಾತೆಗೆ ಪೂಜನೀಯ ಸ್ಥಾನವನ್ನು ನೀಡಿರುವ ಈ  ಪುಣ್ಯಭೂಮಿ  ಭಾರತ "ಅಸಂಖ್ಯಾತ ಗೋಪ್ರೇಮಿ"ಗಳನ್ನು ಜಗತ್ತಿಗೆ ನೀಡಿದೆ, ಹುಟ್ಟಿದ ತರುವಾಯ ಜೀವಿತಾವಧಿಯ ಬಹುಪಾಲು ಭಾಗ ಪರರ ಹಿತಕ್ಕಾಗಿ ಜೀವಿಸುವ ಮೂಕ ಪ್ರಾಣಿಯ ದೈವಿಕ ಸ್ವಭಾವವನ್ನು ಪೂಜಿಸುತ್ತಾ ಬಂದಿರುವ ಭಾರತೀಯರಿಗೆ ಹಸುವಿನ ಬಗ್ಗೆ ಅಪಾರ ಗೌರವವಿದೆ, ಹಸುವಿನ ಉತ್ಪನ್ನಗಳಾದ ಹಾಲು,ಮಜ್ಜಿಗೆ ಹಾಗು ತುಪ್ಪಕ್ಕೆ ವಿಶ್ವದಾದ್ಯಂತ ಅಪಾರ ಬೇಡಿಕೆಯಿದೆ,ಹಸುವಿನ ಗಂಜಲದಲ್ಲಿ ಔಷಧೀಯ ಗುಣಗಳಿದೆ ಎಂಬ ಸತ್ಯಾಂಶ   ವೈಜ್ಞಾನಿಕ ಸಂಶೋಧನೆಯ ಮೂಲಕ ಗೊತ್ತಾಗಿದೆ,ಸುತ್ತಮುತ್ತಲಿನ ಜಾಗ ಶುಚಿಗೊಳಿಸುವಲ್ಲಿಯೂ ಸಹ ಗಂಜಲ ಉಪಯೋಗಕಾರಿ,ಹಸುವಿನ ಗೊಬ್ಬರದಿಂದ ಉತ್ತಮ ಫಲವನ್ನು ಕಂಡಿರುವ ರೈತ ರಾಸಾಯನಿಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಬಲ್ಲವನಾಗಿದ್ದಾನೆ,ಕೃಷಿಕರ ಪಾಲಿಗೆ ಗೋವು ಅವಿಭಾಜ್ಯ ಅಂಗ. ಆಧುನಿಕತೆಯ ಪರಿಣಾಮವಾಗಿ ಹಸುಗಳ ಬದಲಾಗಿ ಯಂತ್ರಗಳ ಮೊರೆ ಹೋದ ರೈತ ಸಾಕಷ್ಟು ಪೆಟ್ಟನ್ನು ತಿಂದಿದ್ದಾನೆ,ಹಳೆಯ ಪದ್ದತಿಗಳ ಹಿಂದೆ ಹೋಗುವ ಯೋಚನೆಗಳು ರೈತನನ್ನು ಕಾಡದೆ ಇರದು.  ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತ ರೈತರನ್ನು ಹೆಚ್ಚಾಗಿ ಅವಲಂಭಿಸಿದೆ,ರೈತರಿಲ್ಲದ ನಾಡಿನಲ್ಲಿ ಬೆಳೆಯನ್ನು ಹೇಗೆ ತಾನೇ ಅಪೇಕ್ಷಿಲಾದೀತು?? ದುರಾಸೆಯ ಕಾರಣವಾಗ...