ಪೋಸ್ಟ್‌ಗಳು

ಏಪ್ರಿಲ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ"

ಇಮೇಜ್
 "ಕುತೂಹಲ ಮೂಡಿಸುತ್ತಿರುವ ಅರ್ನಬ್ ಗೋಸ್ವಾಮಿ ಪುನರಾಗಮನ"  ಪ್ರತಿ ದಿನ ರಾತ್ರಿ ೯ ಆಯಿತೆಂದರೆ "ಅರ್ನಬ್ ಗೋಸ್ವಾಮಿ" ಅವರ ಪ್ರಸಿದ್ಧ ಕಾರ್ಯಕ್ರಮ "ನೇಶನ್ ವಾಂಟ್ಸ್ ಟು ನೊವ್" ಟೈಮ್ಸ್ ನೌ ಸುದ್ಧಿವಾಹಿನಿಯ ಮೂಲಕ ದೇಶ ವಿದೇಶದಾದ್ಯಂತ ಬಿತ್ತರಿ ಆಗುತಿತ್ತು, ಈ ಕಾರ್ಯಕ್ರಮವನ್ನು ಜನ ಅತಿಯಾಗಿಯೇ ಮೆಚ್ಚಿದ್ದರು,ಬೇರೆ ಕಾರ್ಯಕ್ರಮಗಳನ್ನು ನೋಡದಿದ್ದಾಗ ಬೇಸರವಾಗದ ಜನ ಈ ಕಾರ್ಯಕ್ರಮವನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡವರಂತೆ ಭಾವುಕರಾಗುತ್ತಿದರು,ಕೆಲ ತಿಂಗಳುಗಳ ಹಿಂದೆ ನಾನಾ ಕಾರಣಗಳಿಂದ ಅರ್ನಬ್ ಟೈಮ್ಸ್ ನೌ ಸಮೂಹವನ್ನು ತೊರೆದರು, ಅರ್ನಬ್  ನಿರ್ಗಮನದ ಬಳಿಕ ಸುದ್ಧಿ ಮಾಧ್ಯಮದ ಅಭಿಮಾನಿಗಳಿಗಾದ ಬೇಸರವನ್ನು ಹೇಳತೀರದು,ದಿನಂಪ್ರತಿ ಅರ್ನಬ್ ಅನ್ನು ನೆನೆಯುತ್ತಿದ್ದ ಜನ ಟ್ವಿಟ್ಟರ್ ಹಾಗು ಫೇಸ್ ಬುಕ್ ಮೂಲಕ ಅರ್ನಾಬ್ ಕುರಿತಾದ ಮೆಮೆ ಗಳನ್ನು ಪ್ರಕಟ ಪಡಿಸುತ್ತಿದರು,ದೇಶದಲಾಗುತ್ತಿರುವ ದೇಶದ್ರೋಹಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಅರ್ನಬ್ ರಾಷ್ಟ್ರದ್ರೋಹಿಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು,ಅರ್ನಬ್ ರಂತೆ ನೇರವಾಗಿ ಹಾಗು ದಿಟ್ಟವಾಗಿ ಮಾತನಾಡಬಲ್ಲಂತಹ ನಿರೂಪಕರ ಸಂಖ್ಯೆ ಭಾರತೀಯ ಪತ್ರಿಕೋದ್ಯಮದಲ್ಲಿ ಅತಿ ವಿರಳವೆಂದರೆ ಅತಿಶಯೋಕ್ತಿಯೇನಾಗದು?? ಆದ ಕಾರಣವಾಗಿಯೇ ಭಾರತೀಯ ವೀಕ್ಷಕರು ಅರ್ನಬರನ್ನು ಈ ಪರಿ ನೆನೆಸಿಕೊಳ್ಳುತ್ತಿರುವುದು ಹಾಗೂ ಮಿಸ್ ಮಾಡಿಕೊಳ್ಳುತ್ತಿರುವು...

"ವಿವಾದಕ್ಕೀಡಾಗಯತ್ತಿರುವ ಪ್ರತಿಷ್ಠಿತರ ಹೇಳಿಕೆಗಳು"

"ವಿವಾದಕ್ಕೀಡಾಗುತ್ತಿರುವ ಪ್ರತಿಷ್ಠಿತರ ಹೇಳಿಕೆಗಳು": ಕಳೆದ ಒಂದು ವಾರದಿಂದ ಪ್ರತಿಷ್ಠಿತ ವ್ಯಕ್ತಿಗಳು ನೀಡುತ್ತಿರುವ ಹೇಳಿಕೆಗಳು ಅಪಾರ ವಿವಾದಕ್ಕೆ ಒಳಗಾಗುತ್ತಿದೆ, ಕಾಶ್ಮೀರದಲ್ಲಿ ಕಿಡಿಗೇಡಿಗಳು ಸೈನಿಕರ ಮೇಲೆ ಕಲ್ಲು ತೂರುತ್ತಿರುವ ಹಾಗೂ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಭಾರತೀಯ ಪ್ರಜೆಗಳು ಇದನ್ನು ಕಂಡು ಉರಿದುಬಿದ್ದಿದ್ದಾರೆ, ನಮ್ಮ ದೇಶದ ಸೈನಿಕರಿಂದ ಸಕಲ ಸಹಾಯವನ್ನು ಅಪೇಕ್ಷಿಸುವ ಕಾಶ್ಮೀರದ ಕೆಲ ರಾಷ್ಟ್ರದ್ರೋಹಿಗಳ ಈ ನೀಚ ನಡೆ ಖಂಡನಾರ್ಹ. ಪ್ರತ್ಯೇಕವಾದಿಗಳ ಈ ನಡೆಯನ್ನು ಟೀಕಿಸುತ್ತಾ 'ಗೌತಮ್ ಗಂಭೀರ್' ಹೀಗೆ ನುಡಿದರು " ನಮ್ಮ ಜವಾನರ ಮೇಲೆ ಬೀಳುವ ಒಂದೊಂದು ಏಟಿಗೆ ಪ್ರತಿಯಾಗಿ ನೂರು ಜಿಹಾದಿಗಳ ತಲೆ ಉರುಳುತ್ತದೆ, ಆಜಾದಿದೆಗಳೇ ದೇಶಬಿಟ್ಟು ತೊಲಗಿ,ಕಶ್ಮೀರ ನಮ್ಮದು". ಈ ಹೇಳಿಕೆ ಹೊರಬರುತ್ತಿದ್ದಂತೆ 'ಬರ್ಖಾ ದತ್, ಸಾಗರಿಕ ಹಾಗೂ ರಾಣಾ ಅಯೂಬ್' ರಂತಹ ಪತ್ರಕರ್ತರು ಗಂಭೀರ್ ಮೇಲೆ ಮುಗಿಬಿದ್ದರು, ದೇಶದ್ರೋಹಿಗಳ ಪರ ವಕಾಲತ್ತು ವಹಿಸುವುದು ಈ ಪತ್ರಕರ್ತರ ಆದ್ಯ ಕರ್ತವ್ಯವೇ ಆಗಿರುವಾಗ ಇವರಿಂದ ಇನ್ನೇನನ್ನು ತಾನೇ ಆಪೇಕ್ಷಿಸಲಾದೀತು?? ದೇಶದ ಪರ ಮಾತನಾಡಿದ ಗೌತಮ್ ಗೆ ಎದುರಾದ ವಿರೋಧ ಹಲವು ದೇಶಭಕ್ತರನ್ನು ಕೆರಳಿಸಿದ್ದಂತೂ ನಿಜ. ಗಂಭೀರ್ ಹೇಳಿಕೆ ನೀಡುತ್ತಿದ್ದಂತೆ ಅದರ ಪರ ನಿಂತಿದ್ದು ಭಾರತದ ಮತ್ತೊಬ್ಬ ಆಟಗಾರ 'ವಿರೇಂದ್ರ್ ಸೆ...

ಪಲ್ಲವಿ ಅನುಪಲ್ಲವಿ ಇಂದ ಕಾಟ್ರು ವೆಳಿಯಿಡೈ ವರೆಗಿನ ಮಣಿ"ರತ್ನಂ" ರ ಸಿನಿಪಯಣ

ಪಲ್ಲವಿ ಅನುಪಲ್ಲವಿ ಇಂದ ಕಾಟ್ರು ವೆಳಿಯಿಡೈ ವರೆಗಿನ ಮಣಿ"ರತ್ನಂ" ರ ಸಿನಿಪಯಣ  ೮೦ ರ ದಶಕದಲ್ಲಿ "ನಗುವ ನಯನ ಮಧುರ" ಹಾಗೂ "ನಗು ಎಂದಿದೆ" ಎಂಬ ಸುಮಧುರ ಗೀತೆಗಳಿಂದ ಪ್ರಖ್ಯಾತಿ ಆಗಿದ್ದ ಪಲ್ಲವಿ ಅನುಪಲ್ಲವಿ ಎಂಬ ರಾಜ್ಯ ಪ್ರಶಸ್ತಿ ವಿಜೇತ ಚಿತ್ರವನ್ನು ನಿರ್ದೇಶಿಸಿದ್ದು ಮಣಿರತ್ನಂ ಎಂಬ ಕ್ರಿಯಾತ್ಮಕ ನಿರ್ದೇಶಕ,ಚಿತ್ರರಂಗದೊಂದಿಗೆ ಗುರುತಿಸಿಕೊಂಡಿದ್ದ ಕುಟುಂಬದಲ್ಲಿ ಜನಿಸಿದ್ದರೂ ಸಹ  ಆರಂಭಿಕ ದಿನಗಳಲ್ಲಿ ಚಿತ್ರರಂಗದ ನಿಕಟ ಸಂಪರ್ಕ ಇರಲಿಲ್ಲ,ಸಣ್ಣ ಕಥೆಯ ಎಳೆಯೊಂದಿಂಗೆ ಕನ್ನಡ ಚಿತ್ರರಂಗ ಪ್ರವೇಶಿಸಿದ ಮಣಿರತ್ನಂ ಸ್ನೇಹಿತರೊಡಗೂಡಿ ಪಲ್ಲವಿ ಅನುಪಲ್ಲವಿ ಚಿತ್ರವನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾದರು,ನಂತರ ತೆರೆಕಂಡ ಕೆಲ ಚಿತ್ರಗಳು ಅಷ್ಟೊಂದು ಯಶಸ್ವಿ ಆಗದ ಕರಣ ಕೆಲ ಕಾಲ ತೆರೆ ಮರೆಯಾದರು,ಮಣಿರತ್ನಂಗೆ ಮತ್ತೆ ಯಶಸ್ಸು ತಂದು ಕೊಟ್ಟ ಚಿತ್ರವೇ "ಮೌನರಾಗಂ"(೧೯೮೬),ಆಗಿನ ಕಾಲದ ವಿವಾಹ ಪದ್ದತಿಯ ಮಹತ್ವ ಸಾರಿದ್ದ ಈ ಚಿತ್ರದ ಹಾಡುಗಳು ಎಲ್ಲರನ್ನು ಮೋಡಿ ಮಾಡಿತ್ತು,ಚಿತ್ರದ ನಾಯಕಿ ತನ್ನ ಪೋಷಕರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮತ್ತೋರ್ವನನ್ನು ಮದುವೆಯಾಗುತ್ತಾಳೆ,ತನ್ನ ಹಳೆಯ ಪ್ರೇಮ ವೈಫಲ್ಯನ್ನು ನೆನೆದು ತನ್ನನ್ನು ಪ್ರೀತಿಸುವ ಗಂಡನನ್ನು ದ್ವೇಷಿಸಿ ಆತನಿಂದ ವಿವಾಹ ವಿಚ್ಛೇದನಕ ಪಡೆಯಲು ಸಹ ಸಿದ್ಧಳಾಗಿರುತ್ತಾಳೆ,ಕೊನೆಗೆ ಸಂಬಂಧದ ಮಹತ್ವ ಅರಿವಾಗಿ ಗಂಡನೊಡನೆ ಬದಕುವಂತ...

"ಇಂಜಿನಿಯರಿಂಗ್ ದಿನಗಳ ರಾಮ ನವಮಿ ಆಚರಣೆಯ ನೆನಪು ಇನ್ನು ಹಚ್ಚ ಹಸಿರಾಗಿಯೇ ಉಳಿದಿದೆ "

"ಇಂಜಿನಿಯರಿಂಗ್ ದಿನಗಳ ರಾಮ ನವಮಿ ಆಚರಣೆಯ ನೆನಪು ಇನ್ನು ಹಚ್ಚ ಹಸಿರಾಗಿಯೇ ಉಳಿದಿದೆ " ಸ್ವಾತಂತ್ರ ಪೂರ್ವದಲ್ಲಿ ಲೋಕಮಾನ್ಯ 'ಬಾಲ ಗಂಗಾಧರ ತಿಲಕ'ರು ಭಾರತೀಯರನ್ನು ಒಂದುಗೂಡಿಸುವ ಸಲುವಾಗಿ 'ಗಣೇಶ ಉತ್ಸವ'ವನ್ನು ಸಾಮೂಹಿಕವಾಗಿ ಆಚರಿಸಲು ಕರೆಕೊಟ್ಟರು,ಒಡೆದು ಆಳುವ ನೀತಿಯಿಂದ ಪ್ರಸಿದ್ಧರಾಗಿದ್ದ ಬ್ರಿಟಿಷರ ಕುತಂತ್ರದ ಫಲವಾಗಿ ಆ ದಿನಗಳಲ್ಲಿ ಭಾರತೀಯರ ನಡುವೆ ಜಾತಿ ಹಾಗೂ ಧರ್ಮದ ವಿಚಾರವಾಗಿ ದ್ವೇಷದ ಕಿಡಿ ಹೊತ್ತಿ ಉರಿಯುತ್ತಿತ್ತು, ಇದನ್ನು ಮನಗಂಡ ತಿಲಕರು ಮಹಾರಾಷ್ಟ್ರದ ವಿವಿಧೆಡೆ ಎಲ್ಲರನ್ನು ಒಟ್ಟುಗೂಡಿಸಿ ಗಣೇಶ ಉತ್ಸವ ಆಚರಿಸುವ ಮೂಲಕ ನೂತನ ವಿಧದ ಆಚರಣೆಗೆ ನಾಂದಿ ಹಾಡಿದರು,ಗಣೇಶ ಉತ್ಸವದಂತೆಯೇ 'ರಾಮ ನವಮಿ' ಆಚರಣೆಯಲ್ಲಿಯೂ ಸಹ ಅಪಾರ ಜನ ನೆರೆಯುತ್ತಿದ್ದರು.   ಇಕ್ಷ್ವಾಕು ವಂಶದ,ಅಯೋಧ್ಯಾ ಸಾಮ್ರಾಜ್ಯದ ಮಹಾರಾಜನಾದ 'ದಶರಥ'ನು ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಜ್ಞವನ್ನು ನೆರವೇರಿಸದನು, ಲೋಕ ಕಲ್ಯಾಣಕ್ಕಾಗಿ ಆಗ ಜನಿಸಿದವನೇ 'ಶ್ರೀ ರಾಮ',ರಾಮಚಂದ್ರನ ಜನ್ಮದಿನವನ್ನು ಕೊಂಡಾಡುವ ಹಬ್ಬವೇ 'ಶ್ರೀ ರಾಮ ನವಮಿ'. ದಶರಥ ಹಾಗೂ ಕೌಸಲ್ಯ ದಂಪತಿಯ ಪುತ್ರನಾದ ರಾಮನು ಚಿಕ್ಕ ವಯಸ್ಸಿನಲ್ಲಿಯೇ ಸಕಲ ವೇದ-ವಿದ್ಯೆಗಳಲ್ಲಿ ಪಾರಂಗತನಾಗಿದ್ದ ನು. ಅಸುರ ವಂಶದವರಾದ ತಾಟಕಿ,ಸುಬಾಹು ಹಾಗೂ ಮಾರೀಚರು ಯಜ್ಞ ಹಾಗು ಹೋಮಗಳು ನಡೆಯುವಾಗ ಮಾಂಸ ಎಸೆಯುವ ಮೂಲಕ ಋಷಿವೃ...
ಬಹುದಿನಗಳಿಂದ ಕನ್ನಡದಲ್ಲಿ ಲೇಖನ ಬರೆಯಬೇಕೆಂಬ ಕನಸನ್ನು ಈ ಯುಗಾದಿಯ ಶುಭದಿನದಂದು ನನಸಾಗಿಸುತ್ತಿದೇನೆ,ಈ ಪುಟ್ಟ ಲೇಖನವನ್ನು ಓದಿ ಸೂಕ್ತ ಸಲಹೆ ನೀಡಿ.  "ಯುಗಾದಿ ಇಂದ ಶುರುವಾಗಲಿ ಭರವಸೆಯ  ಹೊಸ ಪರ್ವ": ಯುಗಾದಿ ಹಬ್ಬ ಎಂದಾಗ ನಮಗೆ ನೆನಪಾಗುವುದು "ಬೇವು  ಹಾಗೂ  ಬೆಲ್ಲ",ನಮ್ಮ ಪೂರ್ವಜರು ಆಚರಿಸುತ್ತಿದ್ದ  ಬಹುತೇಕ ಹಬ್ಬಗಳಿಗೆ ತನ್ನದೇ ಆದ ವೈಜ್ಞಾನಿಕ ಮಹತ್ವ ಇರುತ್ತಿತ್ತು,ಜೀವನದಲ್ಲಿ ಕಷ್ಟ ಹಾಗೂ  ಸುಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ಉದಾತ್ತ ಧ್ಯೇಯದೊಂದಿಗೆ ಯುಗಾದಿ ಹಬ್ಬವನ್ನು ತಲೆ ತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದೆ,ನಮ್ಮೆಲ್ಲರ ಅನ್ನದಾತ ರಾದ "ನೇಗಿಲ ಯೋಗಿ"ಕೃಷಿಕರಿಗೂ ಸಹ ಈ ಹಬ್ಬ ಒಂದು ರೀತಿಯ ದಿಕ್ಸೂಚಿಯೇ ಆಗಿದೆ,ಈ ಹಬ್ಬದ ನಂತರ ಕೃಷಿಯ ಚಟುವಟಿಕೆಗಳು ಮತ್ತಷ್ಟು ಚುರುಕಾಗುತ್ತದೆ,ಮಳೆಯೇ ಇಲ್ಲದ ಈಗಿನ ಪರಿಸ್ಥಿತಿ ಮಾಯವಾಗಿ ಉತ್ತಮ ಮಳೆ ಬೆಳೆ ಆದರೆ ಅದು ನಮ್ಮ ಅದೃಷ್ಟ,ಹೆಚ್ಚೆಚ್ಚು ಸಸಿ ನೆಡುವ ಅಭಿಯಾನದಿಂದ ಮಾತ್ರ ಅದು ಸಾಧ್ಯ,ಆದರೂ ಸಹ ಯುಗಾದಿ ಹಬ್ಬದ ಮುನ್ನ ಹಾಗೂ ತರುವಾಯ ಮಳೆಯಾಗುವುದು ಪ್ರತೀತಿ. ಬರೀ ಕರ್ನಾಟಕವಷ್ಟೇ ಅಲ್ಲದೆ ಭಾರತದ ವಿವಿಧ ಭಾಗಗಳಲ್ಲಿ "ಚೈತ್ರ ಮಾಸ,ಶುಕ್ಲ ಪಕ್ಷ"ದಂದು ಆಯಾ ನೆಲದ ಸಂಸ್ಕೃತಿಗೆ ಅನುಗುಣವಾಗಿ  ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ,ಕರ್ನಾಟಕ ಹಾಗ...