ಪೋಸ್ಟ್‌ಗಳು

"ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಕೇಸರಿ ಭಯೋತ್ಪಾದನೆ ಎಂಬ ಹುಸಿ ಪರಿಕಲ್ಪನೆ "

ಇಮೇಜ್
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಒಂದಿಲ್ಲೊಂದು ತಕರಾರು ನಡೆಯುತ್ತಲೇ ಬಂದಿದೆ, ಹಲವು ಬಾರಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿದ್ದರು ಸಹ  ಉಭಯ ರಾಜ್ಯಗಳಿಗೆ ಅದರಿಂದ ಸಮಾಧಾನಕರವಾದ ಪರಿಹಾರ ದೊರೆತಿಲ್ಲ, ಕಾವೇರಿ ವಿಚಾರವಾಗಿ ಹಲವಾರು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಜನ ಸಾಮಾನ್ಯರ ಹಿತವನ್ನು ಬದಿಗಿಟ್ಟು ಜನಗಳನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದು ನಮ್ಮೆಲ್ಲರಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ,ಚುನಾ ವಣೆ ಸಮೀಪವಾಗುತ್ತಿದ್ದಂತೆ ಈ ಓರಾಟದ ಕಿಡಿ ಹೆಚ್ಚಾಗುತ್ತದೆ! ಕಳೆದ ವಾರ ಎಲ್ಲೆಡೆ ಐ ಪಿ ಲ್ ಪಂದ್ಯಾವಳಿ ಶುರುವಾಯಿತು, ತಮಿಳುನಾಡಿನ ಬಹುತೇಕ ರಾಜಕಾರಣಿಗಳು ಹಾಗೂ ಚಿತ್ರ ನಟರ ಗುಂಪೊಂದು   ಐ ಪಿ ಲ್ ಪಂದ್ಯವನ್ನು ಚೆನ್ನೈ ನಲ್ಲಿ ಬಹಿಷ್ಕರಿಸಬೇಕೆಂದು ಒಟ್ಟಾಗಿ ಕೂಗಿದರು, ಚೆನ್ನೈ ಪರ ಆಡುವ ಆಟಗಾರರು ಕಪ್ಪು ಪಟ್ಟಿ ಧರಿಸಬೇಕೆಂದು, ಪಂದ್ಯ ನೋಡಲು ಹೋಗುವ ಅಭಿಮಾನಿಗಳು ಸಹ ಕಪ್ಪು ಪಟ್ಟಿ ಧರಿಸಬೇಕೆಂದು ಒತ್ತಾಯಿಸಿದರು, ಓರಾಟದ ನೇತೃತ್ವ ವಹಿಸಿದ್ದ ಕೆಲವರು ಅಭಿಮಾನಿಗಳೊಡನೆ ಅನುಚಿತವಾಗಿ ವರ್ತಿಸಿದ್ದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿತ್ತು,ತಮಿಳುನಾಡಿನೆಗೆ ದೇಶದ ದೃಷ್ಟಿಯನ್ನು ತಿರುಗಿಸಬೇಕೆಂಬ ಹಂಬಲದಲ್ಲಿದ್ದ ಓರಾಟಗಾರರಿಗೆ   ಐ ಪಿ ಲ್ ವರವಾಗಿ ಪರಿಣಮಿಸಿತು. ...

ಅಪರಾಧಿಗಳನ್ನು ಆರಾಧಿಸುವ ಅಂಧಾಭಿಮಾನಿಗಳನ್ನು ಕಂಡು ನಗಬೇಕೋ,ಅಳಬೇಕೋ ??

ಇಮೇಜ್
ಹಿಂದಿ ಚಿತ್ರರಂಗದ ಕಲಾವಿದರಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ ಹಾಗು ಟಬು ಇಪ್ಪತ್ತು ವರ್ಷಗಳ ಹಿಂದೆ ಚಿತ್ರೀಕರಣದ ಪ್ರಯುಕ್ತ ಕಾಡಿನಲ್ಲಿದ್ದ ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ಕೃಷ್ಣ ಮೃಗವನ್ನು ಭೇಟೆಯಾಡಿ ಕೊಂಡಿದ್ದರು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿಯಲ್ಲಿ ಹಾಗೂ ಭೇಟೆಯಾಡಿದ ಆರೋಪದಡಿಯಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯ ೫ ವರ್ಷಗಳ ಸಜೆ ಘೋಷಿಸಿತು, ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದು ಅರಿಯದ ಆತನ ಅಂಧಾಭಿಮಾನಿಗಳು & ಆತನ ಸಹೋದ್ಯೋಗಿಗಳು ತಪ್ಪು ಮಾಡಿದವನ ಪರ ನಿಂತರು, ಈ ಕುರಿತು ಸುದ್ದಿ ವಾಹಿನಿ ಒಂದರಲ್ಲಿ ಚರ್ಚೆಯಾಗುತ್ತಿದ್ದಾಗ ತಲೆಯಲ್ಲಿ ಬುದ್ಧಿಯೇ ಇಲ್ಲದ ನಟಿಮಣಿಯೊಬ್ಬಳು ನಮ್ಮ ದೇಶದಲ್ಲಿ ಬಹುತೇಕ ಮಂದಿ ಮಾಂಸಾಹಾರಿಗಳಿದ್ದಾರೆ, ಈ ತಪ್ಪಿಗೆ ಶಿಕ್ಷೆ ಏಕೆ ಎಂದು ಪ್ರಶ್ನಿಸಿದಳು, ಆಕೆ ಪ್ರಾಣಿಪ್ರಿಯಳಂತೆ !! ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮದಲ್ಲಿ ತೊಡಗಿರುವ ನಟರನ್ನು ಬೆಂಬಲಿಸುವ ಸಹನಟರ ಸಂಖ್ಯೆ ಕಡಿಮೆ ಇರುವ ಈ ಸಮಯದಲ್ಲಿ ಅಕ್ರಮ ಶಸ್ತ್ರಾಸ್ತ್ರ,ಭೇಟೆ,ಭಯೋತ್ಪಾದನೆ ಹಾಗೂ ಇತರ ಆರೋಪದಲ್ಲಿ ಭಾಗಿಯಾಗಿರುವ ನಟರನ್ನು ಬೆಂಬಲಿಸುವ ಸಹನಟರ ದೊಡ್ಡದೊಂದೇ ಗುಂಪಿದೆ, ಇವರ ನಿಷ್ಠೆಗೆ ಏನೆನ್ನಬೇಕೋ ?? ಈ ಹಿಂದೆ ೨ಜಿ ಹಗರಣದಲ್ಲಿ ಸಿಲುಕಿದ್ದ ಅಪರಾಧಿಗಳಾದ ರಾಜ ಹಾಗೂ ಕನಿಮೊಳಿ ಅಚಾನಕ್ಕಾಗಿ ಜೈಲಿನಿಂದ ಬಿಡುಗಡೆ ಆದಾಗ ಅವರದೇ ಪಕ್ಷದವರ ಅಂಧಾಭಿಮಾನಿಗಳ ಗುಂಪೊಂ...

ಮೋದಿಜೀ ಅವರ ಪರೀಕ್ಷಾ ಚರ್ಚೆ ಕಾರ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ"

ಇಮೇಜ್
ಇನ್ನೆರಡು ತಿಂಗಳಲ್ಲಿ ದೇಶದ ವಿವಿಧೆಡೆ ಲಕ್ಷಾಂತರ ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ವಾರ್ಷಿಕ ಪರೀಕ್ಷೆಯನ್ನು ಎದುರಿಸಲಿದ್ದಾರೆ, ವಿದ್ಯಾರ್ಥಿಗಳಲ್ಲಿ ಮೂಡಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿರುವ ಆತ್ಮಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಟ್ಟಿರುವ ಮಾನ್ಯ ಪ್ರಧಾನ ಸೇವಕರು ನಿನ್ನೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ ನು ಉದ್ದೇಶಿಸಿ ಪರೀಕ್ಷೆಯ ಕುರಿತಾಗಿ ಪ್ರೇರಣಾದಾಯಕ ನುಡಿಗಳನ್ನಾಡಿದರು. ತಿಂಗಳುಗಳ ಕಾಲ ಕಷ್ಟ ಪಟ್ಟು ಓಧುವ ವಿದ್ಯಾರ್ಥಿಗಳು ಪರೀಕ್ಷೆಯ ಸಮಯ ಹತ್ತಿರ ಬರುತ್ತಿದ್ದಂತೆ ವಿಚಲಿತರಾಗುವುದು ಸಹಜ,ಶಾಲೆ ಶುರುವಾದಾಗ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಸಮಯ ಸನಿಹವಾಗುತ್ತಿದ್ದಂತೆ ಆಟಗಳಿಗೆ ವಿರಾಮ ಹೇಳಿ ಬಿಡುತ್ತಾರೆ, ಮನುಷ್ಯನ ಜೀವನವು ಪಂಚಭೂತಗಳೊಂದಿಗೆ ವಿಶೇಷವಾದ ಸಂಬಂಧವನ್ನು ಹೊಂದಿದೆ, ಮನೆಯೊಳಗೆ ಸೆಕೆಯಾದಾಗ ಕಿಟಾಗಿ ಬಳಿ ಹೋಗಿ ನಿಂತಾಗ ಮನಸಿಗೆ ಉಲ್ಲಾಸವಾಗುತ್ತದೆ, ಮನೆಯ ಹೊರಗೆಯೋ ಅಥವಾ ಶಾಲಾ ಆವರಣದಲ್ಲೋ ಮಣ್ಣಿನಲ್ಲಿ ಸಹಪಾಠಿಗರೊಂದಿಗೆ ಆಟವಾಡಿದಾಗ ಹೊಸದಾದ ಉತ್ಸಾಹ ಮನಸಿನಲ್ಲಿ ಮೂಡದೆ ಇರದು! ಆಟಕ್ಕಾಗಿ ಮೀಸಲಿಟ್ಟ ಸಮಯದಲ್ಲಿ ಆಟವಾಡಬೇಕು, ಓದುವುದಕ್ಕೆ ಮುಡಿಪಿಟ್ಟ ಸಮಯದಲ್ಲಿ ಓದಬೇಕು,ದಿನ ಆಟವಾಡುವ ವಿದ್ಯಾರ್ಥಿ ಆಟಕ್ಕೆಂದು ಮೀಸಲಾಗಿರುವ ಸಮಯದಲ್ಲಿ ಪರೀಕ್ಷೆ ಸಮಯದಲ್ಲಿಯೂ ಸಹ ಆಟವಾಡಿದರೆ ತಪ್ಪೇನಾಗದು,ಅಭ್...

ಅಪರಾಧಿಗಳಿಗೆ ರಕ್ಷೆ, ನಿರಪರಾಧಿಗಳಿಗೆ ಶಿಕ್ಷೆ, ನ್ಯಾಯ ಎಲ್ಲಿದೆ ?

ಇಮೇಜ್
              ೨ಜಿ ಹಗರಣದ ಅಂತಿಮ ತೀರ್ಪು ನೆನ್ನೆಯಷ್ಟೇ ಹೊರಬಿದ್ದಿದ್ದು ಹಗರಣದಲ್ಲಿ ಭಾಗಿಯಾಗಿದ್ದ ೧೭ ಮಂದಿಗಳು ಸಾಕ್ಷಾಧಾರದ ಕೊರತೆಯ ಫಲವಾಗಿ ದೋಷಮುಕ್ತರಾಗಿದ್ದಾರೆ,೨ಜಿ ಹಗರಣದಿಂದ ದೇಶದ ಬೊಕ್ಕಸಕ್ಕೆ ೧.೭೬ ಲಕ್ಷ ಕೋಟಿ ನಷ್ಟವಾಗಿತ್ತೆಂಬ ಸತ್ಯಾಂಶ ಚಿಕ್ಕ ಪುಟ್ಟ ಮಕ್ಕಳಿಗೂ ಸಹ ಗೊತ್ತಿತ್ತು! ಅಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಎ ರಾಜ ಟೆಲಿಕಾಂ ಸಚಿವರಾಗಿದ್ದರು,೨ಜಿ ತರಂಗ ಗುಚ್ಛಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮಾಯವಾಗಿ ಭ್ರಷ್ಟಾಚಾರ ತಾಂಡವವಾಡಿತ್ತು,ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಹುತೇಕ ಕಂಪನಿಗಳು ಸರ್ಕಾರದ ನೀತಿ ನಿಯಮಗಳನ್ನೆಲ್ಲಾ ಮುರಿದಿದ್ದವು,ಅನರ್ಹ ಸಂಸ್ಥೆಗಳಿಗೆ ಸಹಾಯ ಮಾಡಿದ ರಾಜ ಹಾಗೂ ಅವರ ತಂಡ ತನಗಿಷ್ಟ ಬಂದಂತೆ ಲೈಸನ್ಸ್ ನೀಡಿತ್ತು, ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ನ್ಯಾಯ ಸಮ್ಮತವಾಗಿ ಆಗಬೇಕಿದ್ದ ೨ಜಿ ಹಂಚಿಕೆ ಪ್ರಕ್ರಿಯೆ ಆಗಾಗಲೇ ಹಳ್ಳ ಹಿಡಿದಿತ್ತು, ಈ ಪ್ರಕರಣದ ಕುರಿತಾಗಿ ಸಾಕಷ್ಟು ಅಧ್ಯಯನ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪ್ರಧಾನಿಗಳಿಗೆ ಈ ಕುರಿತು ಪತ್ರ ಬರೆದಿದ್ದರು ಹಾಗೂ ಪ್ರತಿಕ್ರಿಯೆ ಬರುವುದುದು ತಡವಾದಾಗ ಕೋರ್ಟ್ ಮೆಟ್ಟಿಲೇರಲು ತಯಾರಾಗಿದ್ದರು.ಇದರ ಕುರಿತು ಸಿ ಎ ಜಿ ಕೂಡ ವರದಿಯೊಂದನ್ನು ಸಿದ್ದ ಪಡಿಸಿತ್ತು, ವರದಿಯ ಮೂಲಕ ತಿಳಿದುಬಂದಿದ್ದೇನೆಂದರೆ...

ಪದ್ಮಾವತಿ ಚಿತ್ರದ ವಿವಾದದಿಂದ ಲಾಭ ಪಡೆಯುತ್ತಿರುವವರು ಯಾರು ??

ಇಮೇಜ್
            ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಪದ್ಮಾವತಿ ಚಿತ್ರ ಚಿತ್ರೀಕರಣ ಆರಂಭಗೊಂಡ ಮೊದಲ ದಿನದಿಂದಲೂ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುತ್ತಿದೆ, ಚಿತ್ರೀಕರಣದ ವೇಳೆ ಕರ್ಣಿ ಸೇನೆಯ ಕಾರ್ಯಕರ್ತರು ಚಿತ್ರತಂಡದ ಮೇಲೆ ದಾಳಿ ನೆಡೆಸಿದ್ದು ಹಾಗೂ ಸೆಟ್ ಅನ್ನು ಧ್ವಂಸ ಗೊಳಿಸಿದ್ದು ಭಾರಿ ಸುದ್ದಿ ಆಗಿತ್ತು, ಭಾರತೀಯ ಇತಿಹಾಸದಲ್ಲಿ ರಾಣಿ ಪದ್ಮಾವತಿಗೆ  ತನ್ನದೇ ಆದ ಗೌರವಯುತ ಹಾಗು ಪೂಜನೀಯ  ಸ್ಥಾನವಿದೆ,  ತ್ಯಾಗದ ಸಂಕೇತವೇ ಆದ ಪದ್ಮಾವತಿಯನ್ನು ಗೌರವಿಸುವುದು ಈ ಮಣ್ಣಿನಲ್ಲಿ ಹುಟ್ಟಿದ ಭಾರತೀಯರ ಆದ್ಯ ಕರ್ತವ್ಯವೆಂದು ಭಾವಿಸಿದರೆ ತಪ್ಪಾಗಲಾರದು,ಇತಿಹಾಸದಲ್ಲಿ ಹಾಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿರುವ ರಾಣಿ ಪದ್ಮಾವತಿಯ ಕುರಿತಾಗಿ ಚಿತ್ರ ನಿರ್ಮಿಸಬೇಕಾದರೆ ಇತಿಹಾಸದ ಜ್ಞಾನವಿರಬೇಕು ಹಾಗೂ ರಾಣಿ ಪದ್ಮಾವತಿಯ ನೈಜ ಕಥೆಯನ್ನಷ್ಟೇ ತೆರೆಯ ಮೇಲೆ ತೋರಿಸಬೇಕು, ಚಲನಚಿತ್ರ ಎಂಬುದು ವಾಣಿಜ್ಯಾತ್ಮಕ ದೃಷ್ಟಿಕೋನವನ್ನು ಹೊಂದಿದ್ದರೂ ಸಹ ಈ ರೀತಿಯ ಚಿತ್ರಗಳನ್ನು ನಿರ್ಮಿಸುವಾಗ ವಿಶಿಷ್ಟ ಕಾಳಜಿ ಇರಬೇಕು ಹಾಗು ಚಿತ್ರದಿಂದ ಯಾರ ಮನಸ್ಸಿಗೂ ನೋವಾಗದಂತೆ ಚಿತ್ರಿಸಬೇಕು, ಪದ್ಮಾವತಿ ಚಿತ್ರದ ಪೋಸ್ಟರ್ ಹಾಗೂ ಒಂದು ಹಾಡು ಬಹುತೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸತ್ಯ, ರಾಣಿ ಪದ್ಮಾವತಿ ಪಾ...

ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಂತು ಗೌರವಿಸುವುದನ್ನು ಸಹ ಹೇಳಿಕೊಡಬೇಕೆ ಸ್ವಾಮಿ ???

ಇಮೇಜ್
ಕಳೆದ ಕೆಲ ತಿಂಗಳಿಂದ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಚಲನಚಿತ್ರ ಶುರುವಾಗುವ ಮುನ್ನ ಪ್ರಸಾರ ಮಾಡಲಾಗುತ್ತಿದೆ, ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆ ಎಂಬ ಚರ್ಚೆ ಕೂಡ ಬಹಳಷ್ಟು ಸಮಯದಿಂದ ನಡೆಯುತ್ತಿದೆ, ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಈ ಕುರಿತಾಗಿ ಮಹತ್ವವಾದ ತೀರ್ಪೊಂದನ್ನು ನೀಡಿತು, ಆ ತೀರ್ಪು ಏನೆಂದರೆ ರಾಷ್ಟ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಎದ್ದು ನಿಲ್ಲಬೇಕೆಂಬೆದು ಕಡ್ಡಾಯವೇನಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದು !!  ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ವ್ಯಕ್ತಿ ಕುಳಿತ್ತಿದ್ದರೆ ಆ ವ್ಯಕ್ತಿಗೆ ರಾಷ್ಟಪ್ರೇಮವಿಲ್ಲ ಎಂಬ ಗ್ರಹಿಕೆ ತಪ್ಪು ಎನ್ನುವುದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಂಬೋಣ, ಈ ತೀರ್ಪು ಹೊರಬಂದ ಕೂಡಲೇ ಪರ ಹಾಗೂ ವಿರೋಧಗಳು ವ್ಯಕ್ತವಾದವು,ದೇಶಪ್ರೇಮದ ಕಥಾ ಹಂದರವುಳ್ಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಕಮಲ್ ಹಾಸನ್ ಈ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸುತ್ತಾ " ಸುಪ್ರೀಂ ಕೋರ್ಟ್ ನ ತೀರ್ಮಾನವನ್ನು ಸ್ವಾಗತಿಸುತ್ತೇನೆ, ಸಿಂಗಾಪುರ್ ಅಲ್ಲಿ ರಾತ್ರಿಯ ವೇಳೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗುತ್ತದೆ, ನಮ್ಮ ರಾಷ್ಟ್ರ ಗೀತೆಯನ್ನು ಸಹ ದೂರದರ್ಶನದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಪ್ರಸಾರ ಮಾಡಲಿ, ನನ್ನ ದೇಶಭಕ್ತಿಯನ್ನು ವಿವಿಧ ಸ್ಥಳಗಳಲ್ಲಿ ಹಾಗೂ ವಿವಿಧ ವೇಳೆಗಳಲ್ಲಿ ಪರೀಕ್ಷಿಸಬೇಡಿ " ಎಂದರು,  ರಾಷ್ಟ್ರಗೀತೆ  ಪ್ರಸಾರವಾಗುವ  ವೇಳೆ ಎದ್ದು...

ದೀಪಾವಳಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ಕಾಳಿ ಪೂಜೆ ಹಾಗೂ ಗಣೇಶ ಚತುರ್ಥಿ ಆಚರಣೆಗೇಕೆ ವಿರೋಧ ??

ಇಮೇಜ್
ಹಿಂದೂಗಳ ಪಾಲಿಗೆ ದೊಡ್ಡ ಹಬ್ಬವಾದ ದೀಪಾವಳಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ, ಹಬ್ಬದ ಸಿದ್ಧತೆ ಎಲ್ಲೆಡೆ ಜೋರಾಗಿಯೇ ನಡೆಯುತ್ತಿದೆ, ಹಬ್ಬ ಆಚರಿಸಲು ಸಿದ್ಧರಿದ್ದ ದೆಹಲಿಯ ಜನರಿಗೆ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ನೀಡಿದೆ, ಪಟಾಕಿಗಳನ್ನು ನಿಷೇಧಿಸುವ ಸುಪ್ರೀಂ ಕೋರ್ಟ್ ನ ನಿಯಮ ಈಗಾಗಲೇ ಬಹಳಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದೆ, ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ, ದೀಪಾವಳಿ ಅಂದರೆ ನಮಗೆ ನೆನಪಾಗುವುದು ಆನೆ ಪಟಾಕಿ, ಲಕ್ಷ್ಮಿ ಪಟಾಕಿ, ಬಾಂಬ್, ೧೦೦ ವಾಲಾ, ೧೦೦೦ ವಾಲಾ,ಸುರು ಸುರು ಬತ್ತಿ, ಮತಾಪು, ಸೆವೆನ್ ಶಾಟ್ಸ ಹಾಗೂ ಇತರ ಪಟಾಕಿ ಗಳು, ದೀಪಾವಳಿ ಹಾಗೂ ಬಾಲ್ಯದ ನಡುವಿನ ಸಂಬಂಧ ಅದ್ಭುತವಾದದ್ದು, ಅಪ್ಪನ ನೆರವಿನಿಂದಲೋ, ಮಾವನ ನೆರವಿನಿಂದಲೋ, ಸ್ನೇಹಿತನ ನೆರವಿನಿಂದಲೋ ಪಟಾಕಿ ಹೊಡೆದಿದ್ದ ದಿನಗಳನ್ನು ಹೇಗೆ ತಾನೆ ಮರೆಯಲು ಸಾಧ್ಯ, ಪಟಾಕಿ ಪೆಟ್ಟಿಗೆಗಾಗಿ ಅಪ್ಪನೊಂದಿಗೆ ಹಾಗೂ ತಾತನೊಂದಿಗೆ ಕಚ್ಚಾಡಿದ ಕ್ಷಣಗಳು ನೆನಪಿನ ಪುಟದಿಂದ ದೂರ ಸರಿಯಲಾರದಂತದ್ದು, ಪಕ್ಕದ ಮನೆಯ ಸ್ನೇಹಿತ ಹೆಚ್ಚು ಪಟಾಕಿ ಹೊಡೆಯುತಿರುವುದನ್ನು ಕಂಡು ಹೊಟ್ಟೆ ಉರಿದುಕೊಂಡವರ ಪಟ್ಟಿ ಏನು ಕಡಿಮೆಯೇ ?? ದೀಪಾವಳಿ ಹಬ್ಬ ಬಂತೆಂದರೆ ಮನೆ ಮಂದಿಗಳೆಲ್ಲ ಒಟ್ಟಾಗಿ ಸೇರುತ್ತಿದ್ದರು, ಅಭ್ಯಂಜನ ಸ್ನಾನ ( ಎಣ್ಣೆ ಸ್ನಾನ ) ದೊಂದಿಗೆ ಹಬ್ಬ ಆರಂಭವಾಗುತ್ತಿತ್ತು ,ದೀಪಾವಳಿಗೆಂದೇ ತಯಾರಿಸಿದ್...